Monday, December 13, 2010

Wednesday, December 1, 2010

अथ ओ३म् श्रीः
ओं नमः सच्चिदानन्दवेदपुरुषपरम्ब्रह्मणे
धियो यो नः प्रचोदयात्


ಎಲ್ಲರೂ ವೇದಕ್ಕಾಗಿ :- ಜ್ಞಾನಾರ್ಥಿಗಳು ಜ್ಞಾನವನ್ನು ಅಧ್ಯಯನ, ಆರ್ಜನೆ ಮಾಡುವುದು ಎಲ್ಲಿಂದ?
ಎಲ್ಲಿ ಯಥಾರ್ಥ ಜ್ಞಾನ ಲಭಿಸುವುದೋ ಅಲ್ಲಿಂದ. ಅಂತಹ ಜ್ಞಾನಭಂಡಾರವೇ ವೇದ. ಆದ್ದರಿಂದ ಎಲ್ಲರೂ ವೇದಕ್ಕಾಗಿ.
ಎಲ್ಲರೂ :-ಈ ಎಲ್ಲರೂ ಎಂದರೆ ಯಾರು? ಎಲ್ಲರೂ ಎಂದರೆ ಮಾನವರು ಎಂದೇ ಅರ್ಥ. ಮಾನವ ಎಂಬ

ಪದದ ಅರ್ಥವೇ ಜ್ಞಾನಿ ಅಥವಾ ಜ್ಞಾನಾರ್ಥಿ ಎಂದು.

ಜ್ಞಾನ :- ಜ್ಞಾನ ವೆಂದರೆ ಯಥಾರ್ಥ ಅರಿವು, ತಿಳಿವಳಿಕೆ. ಇದರ ಆರ್ಜನೆಯಿಂದ ಆತ್ಮೋದ್ಧಾರ, ಅದರೊಂದಿಗೆ

ಪರೋದ್ಧಾರ. ಅದರಿಂದ ಸಮಾಜೋದ್ಧಾರ.

ವೇದಾಧ್ಯಯನಕ್ಕೆ ಅರ್ಹತೆ :- ಸಸ್ಯಾಹಾರಿ ಮಾನವ ಸಮಾಜ, ಉಪನಯನ ಸಂಸ್ಕಾರ ಹೊಂದಿದವರು. ಆಸಕ್ತ

ಶ್ರದ್ಧಾವಂತರು. ಈ ಅರ್ಹತೆಗಳುಳ್ಳವರು.

ಹಾಗಾದರೆ....., ಈಗಿನ ಮತ, ಪಂಥ-ಪಂಗಡಗಳ ಗೊಂದಲದಲ್ಲಿ ಈ ಅರ್ಹತೆ ಇಲ್ಲದಿರುವ,...... ಆದರೆ, ಆಸಕ್ತಿ ಮತ್ತು ಶ್ರದ್ಧೆಯುಳ್ಳವರಿಗೆ ವೇದಾಧ್ಯಯನ ಮಾಡಲು ಅವಕಾಶವಿಲ್ಲವೇ? ಖಂಡಿತ ಇದೆ. ಈ ವಿಚಾರ ನನ್ನದಲ್ಲ !

ಯಜುರ್ವೇದ ೨೬ ನೇ ಅಧ್ಯಾಯದ ೨ ನೇ ಮಂತ್ರವು ಓಂ ಯಥೇ॒ಮಾಂ ವಾಚ॑ಂ ಕಲ್ಯಾ॒ಣೀಮಾ॒ವದಾ॑ನಿ॒ ಜನೇ॑ಭ್ಯಃ || ಅರ್ಥ:- ಪರಮಾತ್ಮನ ಮಾತು ಇಂತಿದೆ. ಈ ಮಂಗಲಕರವಾದ ವಾಣಿಯನ್ನು (ವೇದ ವಾಣಿಯನ್ನು) ಎಲ್ಲ ಜನರಿಗಾಗಿ ಉಪದೇಶಿಸುತ್ತಿದ್ದೇನೆ.

ಎಂದು. ಹೀಗೆ ವೇದದ್ದೇ ಆದೇಶ. ಹೀಗಿರುವಾಗ ಗೊಂದಲಕ್ಕೆ ಅವಕಾಶವೆಲ್ಲಿ ? ಆದರೆ ವೇದಾಧ್ಯಯನಕ್ಕೆ ಅರ್ಹತೆ ಹೊಂದಲು ಅವರು ಸಸ್ಯಾಹಾರಿಗಳಾಗಬೇಕು, ಉಪನಯನ ಸಂಸ್ಕಾರ ಪಡೆಯಬೇಕು.

ಮತ್ತು ಇದರಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲ. ಸಮಾನವಾದ ಅವಕಾಶ, ಅರ್ಹತೆ ಇದೆ.
ಈ ವಿಚಾರವೂ ನನ್ನದಲ್ಲ !!
ಋಗ್ವೇದ ೮ ನೇ ಮಂಡಲ ೩೩ ನೇ ಸೂಕ್ತ ೧೯ ನೇ ಮಂತ್ರವು ಸ್ತ್ರೀ ಹಿ ಬ್ರ॒ಹ್ಮಾ ಬ॒ಭೂವಿ॑ಥ ||
ಅರ್ಥ:- "ವನಿತಾವರೇಣ್ಯಳು ಚತುರ್ವೇದಜ್ಞಳಾಗಿ ವಿರಾಜಿಸಬಲ್ಲಳು.

ಎಂದು ತಿಳಿಸುತ್ತಿದೆ. ಇದೂ ವೇದ ವಿಷಯವೇ.
ಈ ವಿಷಯಗಳು ನಿಮ್ಮ ಮನಮುಟ್ಟಿ, ಮನತಟ್ಟಿ, ನಿಮ್ಮ ವಿಮರ್ಶೆಯ ಮೂಸೆಯಲ್ಲಿ ಚಿಂತನ-ಮಂಥನ ಮಾಡಿ,
ನಿಮ್ಮ ಆತ್ಮ-ಮನಸ್ಸಿಗೆ ಸರಿ ಎನಿಸಿದರೆ....., ಏಕೆಂದರೆ ಈ ಮಾತೂ ನನ್ನದಲ್ಲ !!!
ಋಗ್ವೇದ ೧ ನೇ ಮಂಡಲ ೮೬ ನೇ ಸೂಕ್ತ ೯ ನೇ ಮಂತ್ರವು ಯೂ॒ಯಂ ತತ್ಸ॑ತ್ಯಶವಸ ಆ॒ವಿಷ್ಕ॑ರ್ತಾ ಮಹಿತ್ವ॒ನಾ ||
ಅರ್ಥ:- ಸತ್ಯವನ್ನೇ ಶಕ್ತಿಯಾಗಿ ಹೊಂದಿರುವ ಧೀರರೇ ! (ಸತ್ಯವಾದ ಶಕ್ತಿಯಿಂದಲೇ ವಿರಾಜಿಸುವ ಧೀರರೇ !) ನೀವು ನಿಮ್ಮ ಸ್ವಂತ ಮಹಿಮೆಯಿಂದಲೇ ಆ ಸತ್ಯವನ್ನು ಆವಿಷ್ಕರಿಸಿರಿ, ಬೆಳಕಿಗೆ ತನ್ನಿರಿ.

ಎಂದು ಸ್ವತಃ ವೇದವೇ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ.
ಆದ್ದರಿಂದ, ಯಥಾರ್ಥ ಜ್ಞಾನ ಆರ್ಜನೆಗಾಗಿ ನಾನೂ ವೇದಾಧ್ಯಯನ ಮಾಡಲೇ ಬೇಕು ಎಂದು ಮುಕ್ತ ಮನಸ್ಸಿನಿಂದ ನಿಶ್ಚಯಿಸಿ, ಆತ್ಮಪೂರ್ವಕವಾಗಿ ನೀವೂ ದೃಢ ನಿರ್ಧಾರಕ್ಕೆ ಬಂದಿದ್ದರೆ, ತಪ್ಪದೆ ತಡಮಾಡದೆ ಬನ್ನಿ. ಈ ಕೂಡಲೇ ವೇದಾಧ್ಯಯನ ಪ್ರಾರಂಭಿಸಿ.


ವಿ.ಸೂ.:- ಈ ವಿಚಾರಗಳಿಂದ ಅಕಸ್ಮಾತ್ ಗೊಂದಲಗೊಂಡಿದ್ದರೂ..... ಬನ್ನಿ. ಮುಕ್ತ ಮನಸ್ಸಿನಿಂದ ಮುಖತಃ ಮಾತನಾಡೋಣ. ಸಮಸ್ಯಾ ಮುಕ್ತರಾಗೋಣ.

ಸಸ್ನೇಹ ನಮಸ್ತೇ,

ಪುರೋಹಿತ ವೇಲಾಪುರಿ ವಿಶ್ವನಾಥ ಶರ್ಮಾ-ವೇದಾಧ್ಯಾಯೀ, ಬೇಲೂರು.

Shyamala Dandakam

Shyamala Dandakam